Search


ನಿರ್ದೇಶಕ ಓಂ ಪ್ರಕಾಶ್‌ ವಿರುದ್ಧ 3 ಕೋಟಿ ವಂಚನೆ ಪ್ರಕರಣ; ಹಣ ಪಡೆದು ವಂಚಿಸಿದ್ರಾ ಖ್ಯಾತ ನಿರ್ದೇಶಕ ?

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಕುರಿತು ನಟ ಭಾಸ್ಕರ್‌ ಶೆಟ್ಟಿ ಎಂಬುವವರು ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರಿಗೆ ದೂರು ನೀಡಿದ್ದು. ಸಿನಿಮಾ ನಿರ್ಮಾಣಕ್ಕಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರು ʻಫೀನಿಕ್ಸ್‌ʼ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಸುಮಾರು 3 ಕೋಟಿ 85 ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ದೂರುದಾರ ಭಾಸ್ಕರ್‌ ಅವರು ಈ ಹಿಂದೆ ನಟ ದರ್ಶನ್‌ ಅಭಿನಯದ ಯೋಧ ಸಿನಿಮಾದಲ್ಲಿ ಓಂ ಪ್ರಕಾಶ್‌ ಅವರೊಟ್ಟಿಗೆ ಕೆಲಸ ಮಾಡಿದ್ದರು, ಈ ಚಿತ್ರದ ಮೂಲಕ ಪರಸ್ಪರರ ಪರಿಚಯವಾಗಿತ್ತು, ನಂತರ ಓಂ ಪ್ರಕಾಶ್‌ ರಾವ್‌ ಅವರು ಫೀನಿಕ್ಸ್‌ ಸಿನಿಮಾ ನಿರ್ಮಾಣಕ್ಕಾಗಿ ಹಣ ಕೇಳಿದ್ದರು, ವೃತ್ತಿಪರ ಪರಿಚಯದ ಆಧಾರದ ಮೇಲೆ ಹಣ ನೀಡಿದ್ದೆ ಎಂದು ದೂರುದಾರ ಆರೋಪಿಸಿದ್ದಾರೆ.

ಓಂ ಪ್ರಕಾಶ್‌ ಅವರು ಭಾಸ್ಕರ್ ಶೆಟ್ಟಿ ಅವರಿಂದ 40 ಲಕ್ಷ ರೂ.ಗಳನ್ನು ಮತ್ತು ವಾಸುದೇವ ಎಂಬುವವರಿಂದ 3 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಪಡೆದಿದ್ದರು ಎಂದು ಆರೋಪಿಸಿದ್ದು. ಈ ಹಣ ವಾಪಸ್ ಕೇಳಿದಾಗ ಅದನ್ನು ಮರುಪಾವತಿಸಿದೆ, ವಂಚಿಸಿದ್ದಾರೆ ಎಂದು ದೂರಿದ್ದಾರೆ. ಇನ್ನು ಇದೇ ಪ್ರಕರಣ ಸಂಬಂಧ ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

By Ravikumar - 22-08-2026


Ads in Post