Search


ವಚನಾನಂದ ಸ್ವಾಮೀಜಿಗೆ ಶಾಕ್‌ ; ಪೋಕ್ಸೋ ಕೇಸ್‌ನಲ್ಲಿ ಸ್ವಾಮಿಗೆ ನೀಡಿದ್ದ ಜಾಮೀನು ಕ್ಯಾನ್ಸಲ್‌

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ವಚನನಂದ ಸ್ವಾಮೀಜಿಗೆ (Vachanananda Swamiji) ನೀಡಿದ್ದ ಜಾಮೀನಿನನ್ನ ಹೈಕೋರ್ಟ್‌ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಹೊರಡಿಸಿದ್ದು, ರೆಗ್ಯೂಲರ್‌ ಬೇಲ್‌ಗೆ ಅರ್ಜಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ 

ಆದಾಗ್ಯೂ ರೆಗ್ಯೂಲರ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿದೆ. ಮೂರು ವಾರಗಳ ವರೆಗೆ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದೆ ಎಂದು ಕೋರ್ಟ್‌ ಹೇಳಿದೆ. ಹೀಗಾಗಿ ಬಂಧನ ಭೀತಿಯಿಂದ ವಚನಾನಂದ ಶ್ರೀಗಳು ಪಾರಾಗಿದ್ದಾರೆ. ಒಂದು ವೇಳೆ ಮೂರು ವಾರಗಳ ಒಳಗೆ ರೆಗ್ಯೂಲರ್‌ ಜಾಮೀನು ದೊರಕದಿದ್ದರೆ, ಸ್ವಾಮೀಜಿ ಬಂಧನವಾಗುವ ಸಾಧ್ಯತೆ ಇದೆ.

ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದೇಕೆ?

ಪೋಕ್ಸೋ ಪ್ರಕರಣದಲ್ಲಿ (POCSO Case) ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ನಿರಿಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಹೇಳಿತು. ದೂರು ನೀಡುವ 1 ವಾರ ಮೊದಲೇ ನಿರೀಕ್ಷಣಾ ಜಾಮೀನು ನೀಡಲಾಗಿದೆ, ಆದ್ದರಿಂದ ಈ ಕ್ರಮ ಸರಿಯಲ್ಲ ಎಂದು ಹೈಕೋರ್ಟ್‌ ಜಾಮೀನು ರದ್ದುಗೊಳಿಸಿತು.

By thebigbulletin.com - 25-06-2026


Ads in Post