ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರ ಬಿ.ವೈ ವಿಜಯೇಂದ್ರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ. ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗುದ್ದು ಬೆಬಿ ಯಡಿಯೂರಪ್ಪ ಅವರ ತಂದೆ ಯಡಿಯೂರಪ್ಪ. ಅವರಿಂದ ನಾವು ನೈತಿಕತೆಯ ಪಾಠ ಕಲಿಬೇಕಿಲ್ಲ. ಜೊತೆಗೆ ಲೈಂಗಿಕ ಕಿರುಕುಳ ಕೊಟ್ಟವರ ಮನೆ ಹುಡುಗ ನಮಗೆ ಏನು ಹೇಳ ಬೇಕಿಲ್ಲ ಎಂದು ಬಿ.ಕೆ ಹರಿಪ್ರಸಾದ್ ಬಿ.ವೈ ವಿಜಯೇಂದ್ರ ಅವರು ವಿರುದ್ಧ ನಾಲಿಗೆ ಹರಿ ಬಿಟ್ಟಿದ್ದಾರೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದ ವಿಜಯೇಂದ್ರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್ "ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದು ಬೆಬಿ ಯಡಿಯೂರಪ್ಪನ ತಂದೆ ಯಡಿಯೂರಪ್ಪ. ಅವರು ನೈತಿಕತೆಯ ಪಾಠವನ್ನು ನಮಗೆ ಹೇಳುತ್ತಿದ್ದಾರೆ. ಗಾಂಧಿ ಕುಟುಂಬದ ಮೇಲಿರೋ ನ್ಯಾಷನಲ್ ಹೆರಾಲ್ಡ್ ಕೇಸ್ ಬಗ್ಗೆ ಹೇಳೋ ಅವರು. ಕಂಪನಿ ಕಾಯ್ದೆ ಅಡಿ 10 ರೂಪಾಯಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಅನ್ನೋದನ್ನು ತಿಳ್ಕೊಬೇಕು ಎಂದು ಹೇಳಿದರು.
ಮುಂದುವರಿದು ಮಾತನಾಡಿದರೆ ಹರಿಪ್ರಸಾದ್ "ಲೈಂಗಿಕ ಕಿರುಕುಳ ಕೊಟ್ಟ ಮನೆಯ ಹುಡುಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಮ ಮಂದಿರದ ಬಗ್ಗೆ ಯಾಕೆ ನಾವು ಕೇಳಿದರೆ. ನಿಮಗೆ ಯಾಕೆ ಬೇಕು ಅಂತ ಪ್ರಶ್ನೆ ಮಾಡ್ತಾರೆ. ಬಿಜೆಪಿಯವರು ಉತ್ತರಪ್ರದೇಶದಲ್ಲಿ ಮಾಡುವ ಅನಾಚಾರಗಳು ಎಂದಿಗೂ ಹೊರಗೆ ಬರಲ್ಲ. ವಿಜಯೇಂದ್ರ ರಾಮ ಮುಖ್ಯನಾ ಹಣ ಕದ್ದವರು ಮುಖ್ಯಾನ ಅಂತ ಕೇಳ್ತಾರೆ. ಅಲ್ಲಿಗೆ ಇವರು ಹಣ ಕದ್ದವರ ಪರ ನಿಂತಿದ್ದಾರೆ ಅಂತ ಆಯ್ತಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ರಾಮಮಂದಿರದ ಪ್ರತಿ ಕೆಲಸದಲ್ಲಿ ಇದ್ದವರು ಪ್ರಧಾನಿ ಮೋದಿ. ಅದಕ್ಕಾಗಿ ನಾವು ಪ್ರಧಾನಿ ರಾಜೀನಾಮೆ ಕೇಳುತ್ತಿದ್ದೇವೆ. ಬಿಜೆಪಿಯಿಂದ ಕಲಿಯಬೇಕಾದ ಅನಿವಾರ್ಯತೆ ಇಲ್ಲ ಎಂದು ಹರಿಪ್ರಸಾದ್ ಹೇಳಿದರು