Search


ನಕ್ಸಲೈಟ್‌ ಆಗಬೇಕಿದ್ದ ನನ್ನನ್ನು ತಡೆದದ್ದು ಅಣ್ಣ ಚಿರಂಜೀವಿ: ಪವನ್‌ ಕಲ್ಯಾಣ

ವಿಶಾಖಪಟ್ಟಣಂ : ತೆಲುಗಿನ ಜನಪ್ರಿಯ ನಟ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ (Pawan Kalyan) ಅವರು, ತಮ್ಮ 17ನೇ ವಯಸ್ಸಿನಲ್ಲಿ ಬಂದೂಕು ಹಿಡಿದು ನಕ್ಸಲ್‌ ಆಗಲು ಮುಂದಾಗಿದ್ದೆ ಎಂದು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಹಿರಿಯ ಸಹೋದರ ಚಿರಂಜೀವಿ(Chiranjeevi) ಅವರು ತಡೆದರು, ಅವರ ಮಾತಿನಿಂದ ನಾನು ಹಿಂದೆ ಸರಿದೆ ಎಂದು ಹೇಳಿಕೊಂಡಿದ್ದಾರೆ.

ಅಮೋಘ ನಟನೆಯಿಂದ ದೇಶದೆಲ್ಲಡೆ ತಮ್ಮ ಅಭಿಮಾನಿ ಬಳಗವನ್ನ ಹೊಂದಿರುವ ಪವನ್‌ ಕಲ್ಯಾಣ್‌, ರಾಜಕೀಯ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಜನಸೇನ (Janasena Party) ಪಕ್ಷದ ಮೂಲಕ ಕಮಾಲ್‌ ಮಾಡಿದ್ದ ಪವನ್‌ ಇದೀಗ ಆಂದ್ರಪ್ರದೇಶ ಉಪ ಮುಖ್ಯಮಂತ್ರಿ ಸ್ಥಾನವನ್ನ ಅಲಂಕರಿಸಿದ್ದಾರೆ. ಇದರ ನಡುವೆ ಅವರು ನೀಡಿದ ಸಂದರ್ಶನವೊಂದು ಚರ್ಚೆಗೆ ಗ್ರಾಸವಾಗಿದ್ದು, ಅವರು ತಮ್ಮ ಬಾಲ್ಯದಲ್ಲಿ ಪ್ರಭಾವಿಸಿದ ಸಿದ್ದಾಂತಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿ ಹೋರಾಟದ ಹಾದಿ...!

ಸಂದರ್ಶನಲ್ಲಿ ತಮ್ಮ ಹೋರಾಟ ಮನಸ್ಥಿತಿಯ ಕುರಿತು ಹೇಳಿಕೊಂಡಿರುವ ಪವನ್‌ ಕಲ್ಯಾಣ್‌ "1980ರ ದಶಕದಲ್ಲಿ ನಾನಿನ್ನೂ ಹದಿಹರೆಯದ ವಯಸ್ಸಿನಲ್ಲಿದ್ದೇ, ಈ ಸಮಯದಲ್ಲಿ ವರ್ಣಭೇದ ನೀತಿ, ಎಲ್‌ಟಿಟಿಇ ಚಳುವಳಿ, ಶೀತಲ ಸಮರದ ಪ್ರಭಾವ, ಜರ್ಮನಿಯ ಅಸ್ಥಿರತೆ, ಖಲಿಸ್ತಾನಿ ಉಗ್ರವಾದ ಸೇರಿದಂತೆ ಹಲವಾರು ವಿಚಾರಗಳು ನನ್ನ ಮೇಲೆ ತೀವ್ರ ಪರಿಣಾಮ ಬೀರಿದ್ದವು. 

ಹಾಗಾಗಿ ನಾನು ಕೂಡ ನಕ್ಸಲ್‌ ಆಗಲು ಬಯಸಿದ್ದೆ, ನಕ್ಸಲರ ಸಭೆಗಳಲ್ಲೂ ಭಾಗವಹಿಸುತ್ತಿದ್ದೆ. ಆದರೆ ಈ ಸಮಯದಲ್ಲಿ ಹಿರಿಯ ಸಹೋದರ ಚಿರಂಜೀವಿ ನನ್ನನ್ನು ತಡೆದು, ರಚನಾತ್ಮಕವಾಗಿ ಏನನ್ನಾದರು ಮಾಡು ಎಂದು ಪ್ರೋತ್ಸಾಹಿಸಿದರು. ಇಂತಹ ಉನ್ಮತ್ತ ಚಿಂತನೆಗಳೆಲ್ಲಾ ಎಲ್ಲಿಂದ ಬರುತ್ತೇ ಎಂದು ಪ್ರಶ್ನಿಸಿ, ನನ್ನ ಮನಸ್ಸನ್ನ ಬೇರೆಡೆಗೆ ಹೊರಳುವಂತೆ ಮಾಡಿದರು, ಇದರಿಂದಾಗಿ ನಾನು ನನ್ನ ನಕ್ಸಲ್‌ ಆಗುವ ಕನಸನ್ನ ಕೈ ಬಿಟ್ಟೆ" ಎಂದು ಪವನ್‌ ಕಲ್ಯಾಣ ಹೇಳಿಕೊಂಡಿದ್ದಾರೆ..

By Ravikumar - 12-06-2026


Ads in Post